
ಕೊಪ್ಪಳ, 29- ಕೊಪ್ಪಳ ನಗರಸಭೆ ವ್ಯಾಪ್ತಿಗೆ ಭಾಗ್ಯನಗರ ಸೇರಿದಂತೆ 14 ಹಳ್ಳಿಗಳನ್ನು ಸೇರ್ಪಡೆ ಮಾಡಿಕೊಳ್ಳಲು ಸರ್ಕಾರಕ್ಕೆ ಪ್ರಸ್ಥಾವನೆ ಸಲ್ಲಿಸಲು ನಗರಸಭೆ ಬಜೆಟ್ ಸಭೆಯಲ್ಲಿ ನಿರ್ಣಯಿಸಲಾಯಿತು ಎಂದು ನಗರಸಭೆ ಅಧ್ಯಕ್ಷ ಅಮ್ಮದ್ ಪಟೇಲ್ ಹೇಳಿದರು.
ಮಂಗಳವಾರದಂದು ಬೆಳಿಗ್ಗೆ ಜರುಗಿದ ಬಜೆಟ್ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ನಗರಸಭೆ ಸದಸ್ಯರ ಒತ್ತಾಯದ ಮೇರೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದ ಅವರು ಕೊಪ್ಪಳ ನಗರಸಭೆಯ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದ ಅವರು ಕೊಪ್ಪಳ ನಗರಸಭೆ ವ್ಯಾಪ್ತಿಗೆ ನಗರದ ಐದು ಕಿ, ಮೀ ವ್ಯಾಪ್ತಿಯ ಗ್ರಾಮಗಳಾದ ಕಿಡದಾಳ,ಬಸಾಪೂರ ,ಚಿಲವಾಡಗಿ, ಟನಕನಕಲ್, ಓಜನಹಳ್ಳಿ, ದದೇಗಲ್, ಮಂಗಳಾಪೂರ,ಗುನ್ನಳಿ, ಹೊರತಟ್ನಾಳ,ಬಹದ್ದೂರ್ ಬಂಡಿ,ಹೊಸಳ್ಳಿ ಸೇರಿದಂತೆ 14 ಹಳ್ಳಿಗಳನ್ನು ಸೇರ್ಪಡೆ ಮಾಡಲು ಸರಕಾರವನ್ನು ಒತ್ತಾಯಿಸುವುದಾಗಿ ತಿಳಿಸಿದರು.