June 5, 2025
FB_IMG_1746075395903

ಕೊಪ್ಪಳ : ತಾಲೂಕಿನ ಸುಕ್ಷೇತ್ರ ಹಲಗೇರಿಯ ಗ್ರಾಮ ದೇವತೆ ಶ್ರೀ ದ್ಯಾಮಮ್ಮದೇವಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗಿರಿ ಎಂದು ಹಲಿಗೇರಿ ಗ್ರಾಮದ ಯುವ ಮುಖಂಡ ಕಳಕನಗೌಡ ಪಾಟೀಲ್ ತಿಳಿಸಿದ್ದಾರೆ
        ಅವರು ಸುದ್ದಿಗಾರರೊಂದಿಗೆ ಮಾತನಾಡಿ ದಿ. 30-04-2025 ಬುಧವಾರ ಮುಂಜಾನೆ ಶ್ರೀ ದ್ಯಾಮಮ್ಮದೇವಿಯ ಬೆಳ್ಳಿಯ ಉತ್ಸವ ಮೂರ್ತಿ ಯನ್ನು ಪೂಜಾರರ ಮನೆಯಿಂದ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಮುಟ್ಟಿಸುವುದು ಹಾಗೂ ನಂದಾದೀಪ ಹಾಕುವುದು ನಂತರ ಹೋಮ, ಪೂಜಾ ಕಾರ್ಯಕ್ರಮ ನಡೆಯುವುದು, ಈ ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು ಪಾಲ್ಗೊಳ್ಳುವರು, ಈ ಒಂಬತ್ತು ದಿನಗಳ ಕಾಲ ನಿತ್ಯ ಬೆಳಗ್ಗೆ ಉಪಹಾರ ನಂತರ ಪ್ರಸಾದ ವ್ಯವಸ್ಥೆ ಇರುತ್ತದೆ,ದಿ. 01-05-2025 ಗುರುವಾರ ಶ್ರೀದೇವಿಗೆ ಗಂಗಾಭಿಷೇಕ ಹಾಗೂ ಆಭರಣಗಳಿಂದ ಅಲಂಕಾರ ಪೂಜೆ,ದಿ. 02-05-2025 ಶುಕ್ರವಾರ ಮಾಲಿ ಮೆರವಣಿಗೆ, ಶ್ರೀ ಬನ್ನಿಮಹಾಂಕಾಳಿ ದೇವಿಗೆ ಪೂಜೆ,ದಿ. 03-05-2025 ಶನಿವಾರ ದಶಮಿ ದಿಂಡಿನಲ್ಲಿ ಶ್ರೀದೇವಿ ಮೂರ್ತಿ ಮೆರವಣಿಗೆ, ದಿನಾಂಕ 04-05-2025 ರವಿವಾರ ರಥದ ಕಳಶ, ಹಾಗೂ ನಂದಿಕೋಲುಗಳನ್ನು ಮೆರವಣಿಗೆಯಿಂದ ದೇವಸ್ಥಾನಕ್ಕೆ ಮುಟ್ಟಿಸುವುದು, ದಿ. 05-05-2025 ಸೋಮವಾರ ಶ್ರೀ ಬನ್ನಿಮಹಾಂಕಾಳಿ ದೇವಿಗೆ ಹಾಗೂ ಗ್ರಾಮದ ಎಲ್ಲಾ ದೇವತೆಗಳಿಗೆ ಗಂಗಾಭಿಷೇಕ ಮತ್ತು ಉಡಿ ತುಂಬುವುದು, ದಿ. 06-05-2025 ಮಂಗಳವಾರ ಗಂಡಾರತಿ, ಗೌರಿ ಕಳಶ ಹಾಗೂ ಕುಂಭ ಮೆರವಣಿಗೆಯಿಂದ ದೇವಸ್ಥಾನಕ್ಕೆ ತಲುಪಿಸುವುದು, ದಿನಾಂಕ 07-05-2025 ಬುಧವಾರ ಬೆಳಿಗ್ಗೆ ಗಂಗಾಪೂಜೆ, ಅಗಿನ ಹಾಗೂ ಪಾಯಸ ನಂತರ ಸಾಯಂಕಾಲ 5 ಗಂಟೆಗೆ ಲಘು ರಥೋತ್ಸವ (ಉಚ್ಛಾಯ), ದಿ. 08-05-2025 ಗುರುವಾರ ರುದ್ರಾಕ್ಷಿ ಸರಗಳ ಮೆರವಣಿಗೆ ಮದ್ಯಾಹ್ನ 4 ಗಂಟೆಗೆ ಪೂಜ್ಯರಿಂದ ಅಶೀರ್ವಚನ ಹಾಗೂ ಸಾಯಂಕಾಲ 5 ಗಂಟೆಗೆ ಮಹಾರಥೋತ್ಸವ ಜರುಗುವುದು ಈ ಜಾತ್ರೆಯ ಎಲ್ಲಾ -ಕಾರ್ಯಕ್ರಮಗಳು ಭಜನೆ, ಬಾಜಾ ಭಜಂತ್ರಿ, ಡೊಳ್ಳು, ನಂದಿಕೋಲು ಹಾಗೂ ಇನ್ನಿತರ ವಾದ್ಯ ವೃಂದದವರಿಂದ ಜರುಗುವವು ಈ ಕಾರ್ಯಕ್ರಮಕ್ಕೆ ಸುತ್ತ ಮುತ್ತಲ ಗ್ರಾಮಗಳ ಭಕ್ತಾದಿಗಳು ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *