
ಕೊಪ್ಪಳ : ತಾಲೂಕಿನ ಸುಕ್ಷೇತ್ರ ಹಲಗೇರಿಯ ಗ್ರಾಮ ದೇವತೆ ಶ್ರೀ ದ್ಯಾಮಮ್ಮದೇವಿ ಜಾತ್ರಾ ಮಹೋತ್ಸವ ಏಪ್ರಿಲ್ 30 ರಿಂದ ಮೇ 8 ರವರೆಗೆ ಅತ್ಯಂತ ವಿಜೃಂಭಣೆಯಿಂದ ಜರುಗುವುದು ಎಂದು ಶ್ರೀ ಶಾಂಭವಿ ಸೇವಾ ಟ್ರಸ್ಟ್ ಕಮಿಟಿ ನಿರ್ದೇಶಕ ಶಂಭುಲಿಂಗನಗೌಡ ಪಾಟೀಲ್ ಹಲಗೇರಿ ಹೇಳಿದರು.
ಅವರು ಮಂಗಳವಾರದಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ದಿ. 30-04-2025 ಬುಧವಾರ ಮುಂಜಾನೆ ಶ್ರೀ ದ್ಯಾಮಮ್ಮದೇವಿಯ ಬೆಳ್ಳಿಯ ಉತ್ಸವ ಮೂರ್ತಿ ಯನ್ನು ಪೂಜಾರರ ಮನೆಯಿಂದ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಮುಟ್ಟಿಸುವುದು ಹಾಗೂ ನಂದಾದೀಪ ಹಾಕುವುದು ನಂತರ ಹೋಮ, ಪೂಜಾ ಕಾರ್ಯಕ್ರಮ ನಡೆಯುವುದು, ಈ ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು ಪಾಲ್ಗೊಳ್ಳುವರು, ಈ ಒಂಬತ್ತು ದಿನಗಳ ಕಾಲ ನಿತ್ಯ ಬೆಳಗ್ಗೆ ಉಪಹಾರ ನಂತರ ಪ್ರಸಾದ ವ್ಯವಸ್ಥೆ ಇರುತ್ತದೆ,ದಿ. 01-05-2025 ಗುರುವಾರ ಶ್ರೀದೇವಿಗೆ ಗಂಗಾಭಿಷೇಕ ಹಾಗೂ ಆಭರಣಗಳಿಂದ ಅಲಂಕಾರ ಪೂಜೆ,ದಿ. 02-05-2025 ಶುಕ್ರವಾರ ಮಾಲಿ ಮೆರವಣಿಗೆ, ಶ್ರೀ ಬನ್ನಿಮಹಾಂಕಾಳಿ ದೇವಿಗೆ ಪೂಜೆ,ದಿ. 03-05-2025 ಶನಿವಾರ ದಶಮಿ ದಿಂಡಿನಲ್ಲಿ ಶ್ರೀದೇವಿ ಮೂರ್ತಿ ಮೆರವಣಿಗೆ, ದಿನಾಂಕ 04-05-2025 ರವಿವಾರ ರಥದ ಕಳಶ,ಹಾಗೂ ನಂದಿಕೋಲುಗಳನ್ನು ಮೆರವಣಿಗೆಯಿಂದ ದೇವಸ್ಥಾನಕ್ಕೆ ಮುಟ್ಟಿಸುವುದು, ದಿ. 05-05-2025 ಸೋಮವಾರ ಶ್ರೀ ಬನ್ನಿಮಹಾಂಕಾಳಿ ದೇವಿಗೆ ಹಾಗೂ ಗ್ರಾಮದ ಎಲ್ಲಾ ದೇವತೆಗಳಿಗೆ ಗಂಗಾಭಿಷೇಕ ಮತ್ತು ಉಡಿ ತುಂಬುವುದು, ದಿ. 06-05-2025 ಮಂಗಳವಾರ ಗಂಡಾರತಿ, ಗೌರಿ ಕಳಶ ಹಾಗೂ ಕುಂಭ ಮೆರವಣಿಗೆಯಿಂದ ದೇವಸ್ಥಾನಕ್ಕೆ ತಲುಪಿಸುವುದು, ದಿನಾಂಕ 07-05-2025 ಬುಧವಾರ ಬೆಳಿಗ್ಗೆ ಗಂಗಾಪೂಜೆ, ಅಗಿನ ಹಾಗೂ ಪಾಯಸ ನಂತರ ಸಾಯಂಕಾಲ 5 ಗಂಟೆಗೆ ಲಘು ರಥೋತ್ಸವ (ಉಚ್ಛಾಯ), ದಿ. 08-05-2025 ಗುರುವಾರ ರುದ್ರಾಕ್ಷಿ ಸರಗಳ ಮೆರವಣಿಗೆ ಮದ್ಯಾಹ್ನ 4 ಗಂಟೆಗೆ ಪೂಜ್ಯರಿಂದ ಅಶೀರ್ವಚನ ಹಾಗೂ ಸಾಯಂಕಾಲ 5 ಗಂಟೆಗೆ ಮಹಾರಥೋತ್ಸವ ಜರುಗುವುದು ಈ ಜಾತ್ರೆಯ ಎಲ್ಲಾ -ಕಾರ್ಯಕ್ರಮಗಳು ಭಜನೆ, ಬಾಜಾ ಭಜಂತ್ರಿ, ಡೊಳ್ಳು, ನಂದಿಕೋಲು ಹಾಗೂ ಇನ್ನಿತರ ವಾದ್ಯ ವೃಂದದವರಿಂದ ಜರುಗುವವು ಈ ಕಾರ್ಯಕ್ರಮಕ್ಕೆ ಸುತ್ತ ಮುತ್ತಲ ಗ್ರಾಮಗಳ ಭಕ್ತಾದಿಗಳು ಆಗಮಿಸಿ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀ ಶಾಂಭವಿ ಸೇವಾ ಟ್ರಸ್ಟ್ ಕಮಿಟಿ ಕಾರ್ಯದರ್ಶಿ ದೇವೇಂದ್ರಪ್ಪ ಬಡಿಗೇರ, ನಿರ್ದೇಶಕರಾದ ಮಂಜುನಾಥ ಮ್ಯಾಗಳಮನಿ, ಹನುಮಂತ ಹಳ್ಳಿಕೇರಿ, ಮಾರುತಿ ಅಂಗಡಿ, ಶರಣಪ್ಪ ಬಿನ್ನಾಳ,ವರುಣಕುಮಾರ ನಿಟ್ಟಾಲಿ, ಯುವ ಮುಖಂಡ ಕಳಕನಗೌಡ ಪಾಟೀಲ್ ಉಪಸ್ಥಿತರಿದ್ದರು.