June 5, 2025
IMG-20250418-WA0026

ಕೊಪ್ಪಳ ತಾಲೂಕಿನ ಹುಲಗಿ‌‌ ಗ್ರಾಮದ ರಂಗಭೂಮಿ ಹಿರಿಯ ಕಲಾವಿದರಾದ ಕೊಟ್ರಯ್ಯ ಹಿರೇಮಠ (74) ಅವರು ಇಂದು 18-04-25 ಶುಕ್ರವಾರ ಸಂಜೆ 6 ಗಂಟೆಗೆ ನಿಧನರಾಗಿದ್ದಾರೆ ಎಂದು ತಿಳಿಸಲು ವಿಷಾಧಿಸುತ್ತೇವೆ.ಅವರು ಒಬ್ಬ ಪುತ್ರ, ಇಬ್ಬರು ಪುತ್ರಿಯರು ಸೇರಿ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.

     ಅವರ ಅಂತ್ಯಕ್ರಿಯೆಯು ನಾಳೆ ‌19-04-25 ಶನಿವಾರ ಮಧ್ಯಾಹ್ನ 12 ಗಂಟೆಗೆ ಹುಲಿಗಿ ಗ್ರಾಮದ ವೀರಶೈವ ರುದ್ರಭೂಮಿಯಲ್ಲಿ
ನೆರೆವೆರೆಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.

ಸಂತಾಪ : ರಂಗಭೂಮಿಯ ಹಿರಿಯ ಕಲಾವಿದ ಕೊಟ್ರಯ್ಯ ಹಿರೇಮಠ ನಿಧನಕ್ಕೆ ಮಾಜಿ ಸಂಸದ ಸಂಗಣ್ಣ ಕರಡಿ, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಪಾಲಾಕ್ಷಪ್ಪ ಗುಂಗಾಡಿ, ಕೆಪಿಸಿಸಿ ಸಂಯೋಜಕ ಕೆ.ಎಂ ಸೈಯದ್, ಕೊಪ್ಪಳ ಜಿಲ್ಲಾ ಸಹಕಾರಿ ಯೂನಿಯನ್ ಉಪಾಧ್ಯಕ್ಷ ಹಾಗೂ ನಾಟಕ ಕವಿ ಹಾಲಯ್ಯ ಹುಡೇಜಾಲಿ, ಕಲಾವಿದ ಭಾಷಾ ಹಿರೇಮನಿ ಕಿನ್ನಾಳ, ಕೊಪ್ಪಳ ತಾಲೂಕು ವೀರಶೈವ ಲಿಂಗಾಯಿತ ಮಹಾಸಭಾದಅಧ್ಯಕ್ಷ ನಾಗಭೂಷಣ ಸಾಲಿಮಠ ಸೇರಿದಂತೆ ಮತ್ತಿತರರು ಸಂತಾಪ ಸೂಚಿಸಿದ್ದಾರೆ.

 

Leave a Reply

Your email address will not be published. Required fields are marked *