
ಕೊಪ್ಪಳ: ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಈ ಕಾರ್ಖಾನೆಯು ಪ್ರಪ್ರಥಮವಾಗಿ ಕೈಗಾರಿಕೆಯಲ್ಲಿ ಹಿಂದುಳಿದ ಪ್ರದೇಶವಾದ ಕೊಪ್ಪಳ ಜಿಲ್ಲೆಯ ಬೇವಿನಹಳ್ಳಿಯ ಹತ್ತಿರ 1993 ರಲ್ಲಿ ಸ್ಥಾಪನೆಗೊಂಡಿದ್ದು, ಪ್ರಮುಖವಾಗಿ ಬೀಡು ಕಬ್ಬಿಣ ಮತ್ತು ಬೂದು ಕಬ್ಬಿಣದ ಎರಕಗಳನ್ನು ಉತ್ಪದಿಸುತ್ತಿದೆ. ಈ ಉತ್ಪನ್ನಗಳು ಮುಖ್ಯವಾಗಿ ವಾಹನ ತಯಾರಿಕಾ ವಲಯಕ್ಕೆ ಬಿಡಿಭಾಗವಾಗಿ ಪೊರೈಸಲ್ಪಡುತ್ತವೆ.
ಕಾರ್ಖಾನೆಯು ಸ್ಥಾಪನೆಯಾದಾಗಿನಿಂದಲೂ ಹತ್ತಿರವಿರುವ ಬೇವಿನಹಳ್ಳಿ ಗ್ರಾಮ ಹಾಗೂ ಸುತ್ತ-ಮುತ್ತಲಿನ ಗ್ರಾಮಗಳಲ್ಲಿ ಸಾಮಾಜಿಕ ಚಟುವಟಿಕೆಗಳನ್ನು ಹಮ್ಮಿಕೊಂಡು ಬಂದಿರುತ್ತದೆ. ಕಂಪನಿಯ ಸಾಂಸ್ಥಿಕ ಸಮಾಜಿಕ ಹೊಣೆಗಾರಿಕೆಯನ್ನು (CSR) ಕ್ರಮಬದ್ಧವಾಗಿ ನೆಡೆಸಲು 2001 ರಲ್ಲಿ ಕಿರ್ಲೋಸ್ಕರ್ ಫೆರಸ್ ಗ್ರಾಮೀಣಾಭಿವೃದ್ಧಿ ಟ್ರಸ್ಟನ್ನು ಸ್ಥಾಪಿಸಲಾಗಿದ್ದು, ಈ ಟ್ರಸ್ಟ್ನ ಮುಖಾಂತರ ಗ್ರಾಮದ ಮೂಲಭೂತ ಸೌಕರ್ಯ, ಶಿಕ್ಷಣ, ಆರೋಗ್ಯ ಮತ್ತು ನೈರ್ಮಲ್ಯ ಇವುಗಳಿಗೆ ಒತ್ತುಕೊಟ್ಟು ವಾರ್ಷಿಕ ಯೋಜನೆಯನ್ನು ರೂಪಿಸಿ ಅದರಂತೆ ಕೆಲಸಗಳನ್ನು ಕೈಗೆತ್ತಿಕೊಳ್ಳುತ್ತಿದೆ. ಈ ಚಟುವಟಿಕೆಗಳಲ್ಲಿ ಕಿರ್ಲೋಸ್ಕರ್ ವಸುಂಧರಾ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವವೂ ಒಂದಾಗಿದೆ.
ಪರಿಸರ ಸಂರಕ್ಷಿಸುವ ಕುರಿತು ಕಿಂಚಿತ್ತಾದರೂ ಸೇವೆಯನ್ನು ಸಲ್ಲಿಸುವ ದೃಷ್ಟಿಯಿಂದ, ಮಣೆಯಲ್ಲಿ ಸ್ಥಾಪನೆಗೊಂಡ ವಸುಂಧರಾ ಕ್ಲಬ್ ಜೊತೆಗೂಡಿ ಕಿರ್ಲೋಸ್ಕರ್ ವಸುಂಧರಾ ಎಂಬ ವೇದಿಕೆಯಡಿಯಲ್ಲಿ ಈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಆಯೋಜಿಸುತ್ತ ಬಂದಿದ್ದೇವೆ. ಕಳೆದ ಐದಿನೈದು ವರ್ಷಗಳಿಂದ ದೇಶದ 7 ರಾಜ್ಯಗಳ 30 ನಗರಗಳಲ್ಲಿ ಈ ಚಲನ ಚಿತ್ರವನ್ನು ಆಯೋಜಿಸುತ್ತಿದ್ದು, ಈ ವರ್ಷವೂ ಸಹ ಈ ಚಲನಚಿತ್ರೋತ್ಸವವನ್ನು ದಿನಾಂಕ 22-04-2025 ರಿಂದ 24-04-2025 ರವರೆಗೆ ಆಯೋಜಿಸಲಾಗುತ್ತಿದೆ.
ಈ ಕಾರ್ಯಕ್ರಮದ ಮುಖ್ಯ ಸಂದೇಶ ‘ಪೌಷ್ಠಿಕ ಆಹಾರ, ಸುಂದರ ಪ್ರಕೃತಿ ಮತ್ತು ಆರೋಗ್ಯಕರ ಸಮಾಜವನ್ನು ರೂಪಿಸುವುದು’ (‘Nutritious Food, Flourishing Nature and Healthy Society’) ವಿಷಯವಾಗಿರುತ್ತದೆ.
ಈ ಚಿತ್ರೋತ್ಸವದಲ್ಲಿ ಪರಿಸರ, ವನ್ಯಜೀವಿ, ಶಕ್ತಿ, ಗಾಳಿ, ನೀರು ಕುರಿತು ಜಾಗೃತಿ ಮೂಡಿಸುವ ದೇಶೀಯ ಹಾಗೂ ವಿದೇಶೀಯ ಖ್ಯಾತ ನಿರ್ದೇಶಕರು ತಯಾರಿಸಿದ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳಿಸಿದ ಆಯ್ದ ಚಲನಚಿತ್ರಗಳನ್ನು ಶಾಲಾ-ಕಾಲೇಜುಗಳಲ್ಲಿ ಪ್ರದರ್ಶಿಸಲಾಗುತ್ತದೆ. ಈ ಚಿತ್ರೋತ್ಸವದ ಅಂಗವಾಗಿ, ಸಿರಿ ದಾನ್ಯ ಪ್ರದರ್ಶನವನ್ನು ಆಯೋಜಿಸಲಾಗಿದ್ದು, ವಿಶ್ವಾದ್ಯಾಂತ ಆಹ್ವಾನಿಸಿದ ಸುಮಾರು 10,000 ಅತ್ಯತ್ತಮ ಚಿತ್ರಗಳಲ್ಲಿ ಆಯ್ದ ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ.
ಇದಲ್ಲದೇ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಚರ್ಚಾಕೂಟಗಳು, ಕಿರುನಾಟಕ ಸ್ಪರ್ಧೆ ಮತ್ತು ಘೋಷಣಾ ಸ್ಪರ್ಧೆಗಳನ್ನು ಹಮ್ಮಿಕೊಂಡು ಪರಿಸರದ ಕುರಿತು ಜಾಗೃತಿ ಮೂಡಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ.
ಈ ಚಲನಚಿತ್ರೋತ್ಸವದ ಅಂಗವಾಗಿ, ಪರಿಸರ, ವನ್ಯಜೀವಿ, ಕೃಷಿ ಇತ್ಯಾದಿ ವಿಭಾಗಗಳಲ್ಲಿ ಸಾಧನೆ ಮಾಡಿದ ಆಗ್ರಗಣ್ಯರಿಗೆ ವಸುಂಧರಾ ಮಿತ್ರ ಮತ್ತು ವಸುಂಧರಾ ಸನ್ಮಾನ್ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು.
ಈ ಕಾರ್ಯಕ್ರಮವು ವಿವಿಧ ಭಾಗಗಳಿಗೂ ತಲುಪಬೇಕು. ಸಾಕಷ್ಟು ಜನರನ್ನು ತಲುಪಬೇಕು ಎನ್ನುವುದು ನಮ್ಮ ಉದ್ದೇಶ. ಆದ್ದರಿಂದ, ಈ ಬಾರಿ, ಈ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭವನ್ನು ದಿನಾಂಕ 22-04-2025 ರಂದು ಬೆಳಿಗ್ಗೆ 10.00 ಗಂಟೆಗೆ ಶ್ರೀ ಪಾನಘಂಟಿ ಭಾಗ್ಯಮ್ಮ ಭೀಮಸೇನಪ್ಪ ಮಂಗಳ ಭವನ, ಕೊಪ್ಪಳದಲ್ಲಿ ಆಯೋಜಿಸಲಾಗಿದೆ. ಡಾ| ವಾಸುದೇವ ಆರ್. ಡೀನ್ ಕಾಲೇಜ್ ಆಫ್ ಪಾರೆಸ್ಟ್ ಶಿರಸಿ ಮತ್ತು ಶ್ರೀಮತಿ ಕಾವ್ಯ ಚರ್ತುವೇದಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಕೊಪ್ಪಳ ಇವರು ಈ ಚಿತ್ರೋತ್ಸವವನ್ನು ಉದ್ಘಾಟಿಸಲಿದ್ದಾರೆ.
ಈ ಸಮಾರಂಭದಲ್ಲಿ ಶ್ರೀ ಉಮಾಪತಿ ಗಜಾನನ ಭಟ್, ಪರಿಸರ ಸಂಯೋಜಕರು, ಯೂಥ್ ಫಾರ್ ಸೇವಾ ಬೆಂಗಳೂರು, ಇವರು ಪರಿಸರ ಸಂರಕ್ಷಣೆ ಕುರಿತು ಮಾಡಿದ ಅಮೋಘ ಸಾಧನೆಯನ್ನು ಗುರುತಿಸಿ “ವಸುಂಧರಾ ಸನ್ಮಾನ್” ನೀಡಿ ಗೌರವಿಸಲಾಗುವುದು, ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ನ ಕಾರ್ಯನಿರ್ವಾಹಕ ನಿರ್ದೇಶಕರು ಮತ್ತು ಮುಖ್ಯ ಹಣಕಾಸು ಅಧಿಕಾರಿಗಳಾದ ಶ್ರೀ ಆರ್. ಎಸ್. ಶ್ರೀವತ್ಸನ್ ಮತ್ತು ಡಾ. ಪಿ ನಾರಾಯಣ ಕಾರ್ಯನಿರ್ವಾಹಕ ಉಪಾಧ್ಯಕ್ಷರು, ಮಾನವ ಸಂಪನ್ಮೂಲ ಮತ್ತು ಸಾ.ಆ ಹಾಗೂ ಉಪಾಧ್ಯಕ್ಷರು ಕಿರ್ಲೋಸ್ಕರ್ ವಸುಂಧರಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ. ಈ ಚಲನಚಿತ್ರೋತ್ಸವದ ನಿರ್ದೇಶಕರಾದ ವಿರೇಂದ್ರ ಚಿತ್ರವ್. ವಸುಂಧರಾ ಕ್ಲಬ್ ಪುಣೆ ಇವರುಗಳು ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಈ ಚಲನಚಿತ್ರೋತ್ಸದ ಸಮಾರೋಪ ಸಮಾರಂಭವನ್ನು ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ನ ಕಾರ್ಖಾನೆಯಲ್ಲಿ ದಿನಾಂಕ 24-04-2025 ರಂದು ಸಾಯಂಕಾಲ 4.00 ಗಂಟೆಗೆ ಆಯೋಜಿಸಲಾಗಿದ್ದು, ಈ ಸಮಾರಂಭದಲ್ಲಿ ಪರಿಸರ ಸಂರಕ್ಷಣೆಯ ಕುರಿತು ಅಮೋಘ ಸೇವೆ ಸಲ್ಲಿಸುತ್ತಿರುವ ಶ್ರೀ ವೇಣುಗೋಪಾಲ ನಾಯ್ಡು, ಕೃಷಿಕರು ಮತ್ತು ಉತ್ಸಾಹಿ ಪರಿಸರವಾದಿ, ಇವರಿಗೆ ‘ವಸುಂಧರಾ ಮಿತ್ರ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. ಈ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಬಿ. ಎಸ್ ಮುರುಳಿಧರ್ ಹಿರಿಯ ಪರಿಸರ ಅಧಿಕಾರಿಗಳು, ವಿಜಯನಗರ ಮತ್ತು ಕಲಬುರಗಿ ವಿಭಾಗ, ಮತ್ತು ಮುಖ್ಯ ಅತಿಥಿಗಳಾಗಿ ಶ್ರೀಮತಿ ಸ್ವಾತಿ ಎಲ್, ವಲಯ ಅರಣ್ಯ ಅಧಿಕಾರಿಗಳು, ಮುನಿರಬಾದ್ ವಲಯ, ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ನ ಕಾರ್ಯನಿರ್ವಾಹಕ ನಿರ್ದೇಶಕರು ಮತ್ತು ಮುಖ್ಯ ಹಣಕಾಸು ಅಧಿಕಾರಿಗಳಾದ ಆರ್. ಎಸ್. ಶ್ರೀವತ್ಸನ್ ಮತ್ತು ಡಾ. ಪಿ ನಾರಾಯಣ ಕಾರ್ಯನಿರ್ವಾಹಕ ಉಪಾಧ್ಯಕ್ಷರು, ಮಾನವ ಸಂಪನ್ಮೂಲ ಮತ್ತು ಸಾ.ಆ ಹಾಗೂ ಉಪಾಧ್ಯಕ್ಷರು ಕಿರ್ಲೋಸ್ಕರ್ ವಸುಂಧರಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ. ಈ ಚಲನಚಿತ್ರೋತ್ಸವದ ನಿರ್ದೇಶಕರಾದ ವಿರೇಂದ್ರ ಚಿತ್ರವ್, ವಸುಂಧರಾ ಕ್ಲಬ್ ಪುಣೆ ಇವರುಗಳು ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಈ ಚಲನಚಿತ್ರೋತ್ಸವ ಪೂರ್ವಭಾವಿಯಾಗಿ ದಿನಾಂಕ 20-04-2025 ರಂದು ಹಂಪಿ ಹೆರಿಟೇಜ್ ವಾಕ್ನ್ನು ಆಯೋಜಿಸಿದ್ದು, ಹಂಪಿಯಲ್ಲಿ ಬೆಳಿಗ್ಗೆ 06-00 ಗಂಟೆಗೆಯಿಂದ 09:00 ಘಂಟೆಯವರೆಗೆ ಆಯೋಜಿಸಲಾಗಿದೆ. ಸುಮಾರು 250 ಕ್ಕೂ ಅಧಿಕ ಪರಿಸರ ಪ್ರೇಮಿಗಳು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಕಿರ್ಲೋಸ್ಕರ್ ಲೇಡೀಸ್ ಕ್ಲಬ್ ಸದಸ್ಯೆಯರುಗಳು, ಕಾರ್ಖಾನೆಯ ಉದ್ಯೋಗಿಗಳು ಭಾಗವಹಿಸಲಿದ್ದಾರೆ.
ಈ ಚಲನಚಿತ್ರೋತ್ಸವದ ಅಂಗವಾಗಿ ದಿನಾಂಕ 23-04-2025 ರಂದು ಹೊಸಪೇಟೆ ಮತ್ತು ಕೊಪ್ಪಳದ ವಿವಿಧ ಶಾಲಾ-ಕಾಲೇಜುಗಳಲ್ಲಿ ಪರಿಸರದ ಕುರಿತು ಕಿರುಚಿತ್ರಗಳನ್ನು ಪ್ರದರ್ಶಿಸಲಾಗುವುದು.
ಕಾರಣ, ಪರಿಸರ ಜಾಗೃತಿ ಮೂಡಿಸುವ ಈ ನಮ್ಮ ಅಲ್ಪ ಪ್ರಯತ್ನಕ್ಕೆ ತಾವೂ ಜೊತೆಗೊಡಬೇಕೆಂದು ವಿನಂತಿಸಿಕೊಳ್ಳುತ್ತಾ ಈ ಚಲನಚಿತ್ರೋತ್ಸವಕ್ಕೆ ವ್ಯಾಪಕ ಪ್ರಚಾರ ನೀಡಬೇಕೆಂದು ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಉದ್ದವಕುಲಕರ್ಣಿ – 9449253268 /9742058423, ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಡಾ. ಪಿ. ನಾರಾಯಣ,ಕಾರ್ಯನಿರ್ವಾಹಕ ಉಪಾಧ್ಯಕ್ಷರು-ಮಾನವ ಸಂಪನ್ಮೂಲ ಮತ್ತು ಸಾ.ಆಡಳಿತ ಮತ್ತು ಉಪಾಧ್ಯಕ್ಷರು – ಕಿರ್ಲೋಸ್ಕರ್-ವಸುಂಧರಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಅವರು ತಿಳಿಸಿದ್ದಾರೆ.