June 5, 2025
1743394053170

ಗವಿಮಠದಲ್ಲಿ ಪಂಚಾಂಗ ಪಠಣ:
ಈ ವರ್ಷ ಉತ್ತಮ ಮಳೆ, ದಿನಸಿ,ಗೃಹ ಬಳಕೆ ಸಾಮಗ್ರಿಗಳು ಹೆಚ್ಚಳ.
ಕೊಪ್ಪಳ: ಗವಿಮಠದಲ್ಲಿ ಪ್ರತಿ ವರ್ಷದಂತೆ ಈ ವರ್ಷ ಯುಗಾದಿ ಪಾಡ್ಯದಂದು ಸಂಜೆ ಶ್ರೀಗವಿಸಿದ್ದೇಶ್ವರ ಮಹಾಸ್ವಾಮಿಗಳ ಸಮ್ಮುಖದಲ್ಲಿ ಸಮ್ಮುಖದಲ್ಲಿ ಸಂಸ್ಥಾನ ಗವಿಮಠದ ಜ್ಯೋತಿಷ್ಯಕರಾದ ವೇ.ಶ್ರೀ ರುದ್ರಯ್ಯಸ್ವಾಮಿ ವಿರುಪಾಕ್ಷಯ್ಯಸ್ವಾಮಿ ಚನ್ನವಡೆಯರಮಠ ಅವರು ಪಂಚಾಂಗವನ್ನು ಪಠಣಿಸಿ ಈ ವರ್ಷ ಮೇಘಾರಾಜನು ಭಾರತದೇಶದಲ್ಲಿ ಸಮೃದ್ದೀಯಾಗಿ ಮಳೆ ಸುರಿಸುವನು,ದೇಶದೊಳಗೆ ಉತ್ತಮ ಮಳೆ ಆಗುವುದರಿಂದ ಎಲ್ಲಾ ಬೆಳೆಗಳು ಉತ್ತಮವಾಗಿ ಬೆಳೆಯುವವು ಜೋಳ. ಗೋದಿ,ಗೋವಿನಜೋಳ, ಭತ್ತ, ರಾಗಿ, ಸಜ್ಜಿ, ಕಡಲೆ, ಉದ್ದು, ತೋಗರಿ, ಅವರೆ, ಹೆಸರು, ಅಲಸಂದಿ, ಮಡಕಿ, ಎಳ್ಳು, ಗುರೇಳ್ಳು, ಔಡಲ, ಕುಸುಬಿ, ಹತ್ತಿ, ಮತ್ತು ಎಣ್ಣೆಕಾಳುಗಳು ಹಾಗು ಶೆಂಗಾ, ಸೂರ್ಯಾಪಾನ, ಔಡಲ, ಹತ್ತಿಕಾಳು. ಬೇನುಬಿಜಾ ತೇಜಿಯಾಗಿ ಮಾರುವವು ಮತ್ತು ಉದ್ದು ಉರುಳಿ ನೆವಣಿ ಆರ್ಕ ಸಜ್ಜಿ ಎಳ್ಳು ತೇಜಿಯಾಗಿ ಮಾರುವವು ಈ ಎಲ್ಲಾ ಬೆಳೆಗಳು ಚೆನ್ನಾಗಿ ಬೆಳೆಯುವವು ಮಳೆ ಉತ್ತಮವಾಗಿರುವುದರಿಂದ ಕೆರೆ.ಬಾವಿ,ಕಾಲುವೆ,ಹಳ್ಳಗಳು. ನೀರಿನಿಂದ ತುಂಬುವವು, ದ್ವಿಚಕ್ರ ವಾಹನ, ಕಾರು ಮೋಟರು ಹಾಗೂ ಯಂತ್ರೋಪಕರಣಗಳು ಟಿವಿ ಫ್ರೀಜ್ ಕಂಪ್ಯೂಟರ್ ಗಳು, ಎಲೆಟ್ರಾನಿಕ್ಸ ಉಪಕರಣಗಳು ತೇಜಿಯಾಗಿ ಮಾರುವವು ಪೆಟ್ರೋಲ್, ಡೀಸೆಲ್ ದಾರಣೆಯಲ್ಲಿ ಭಾರಿ ಏರಿಳಿತ ಕಂಡುಬರುವುದು, ಕಾಗದ, ಚರ್ಮ, ಅಂಟು, ರಾಳ, ಅರಗುಗ್ಗಳ, ವರ್ತಕರು, ಅಧಿಕ ಧನ ಸಂಪಾಧಿಸುವರು ಬೆಳ್ಳಿ, ಬಂಗಾರ, ತಾಮ್ರ ಹಿತ್ತಳೆ ಸೀಸ ಹಂಡೆ ಬಾಂಡೆಗಳು ನೂಲು ರೇಷ್ಮೆ ಸೀರೆ ಮಡಿ ಪೀತಾಂಬರಗಳು ತೇಗು, ಮತ್ತಿ, ಹೊನ್ನಿ, ಇಟ್ಟಂಗಿ, ಸಿಮೆಂಟ್, ಕಬ್ಬಿಣ, ಮರಳು.ಕಪ್ಪು ಬಣ್ಣ, ಕಪ್ಪು ಬಣ್ಣದ ಬಟ್ಟೆಗಳು ಕಪ್ಪು ವಸ್ತುಗಳ ಬೆಲೆಯಲ್ಲಿ ಹೆಚ್ಚಳ, ಪುಷ್ಯಮಾಸದಲ್ಲಿ ಹಾಗೂ ಪಾಲ್ಗುಣಮಾಸದಲ್ಲಿ ಧಾರಣಿ ಮಂದಗತಿಯಲ್ಲಿರುವುದು ಹಾಗೂ ಬೆಲ್ಲ. ಸಕ್ಕರೆ, ತುಪ್ಪ, ಹಾಲು, ಮೊಸರು, ಬೆಣ್ಣೆ, ವಗೈರೆ ಹೈನೋತ್ಪನ್ನ ಜೀನಸುಗಳ ಬೆಲೆ ಹೆಚ್ಚಳ ಹಾಗೂ ಗೃಹಉಪಯೋಗಿ ವಸ್ತುಗಳು. ಬೆಲೆಯಲ್ಲಿ ಹೆಚ್ಚಳ ಆಗುವವು ಎಂದು ಪಂಚಾಂಗ ತಿಳಿಸುತ್ತದೆಂದು ನೆರೆದ ಭಕ್ತರಿಗೆ ತಿಳಿಸಿದರು.
    ಈ ಸಂದರ್ಭದಲ್ಲಿ ಶಾಂತಣ್ಣ ಮುದುಗಲ್, ಬಸವರಾಜ್ ಬಳ್ಳೊಳ್ಳಿ, ರಾಜೇಂದ್ರ ಕುಮಾರ್ ಶೆಟ್ಟರ್,ಶಿವಕುಮಾರ್ ಪಾವಲಿಶೆಟ್ಟರ್, ಗವಿಸಿದ್ದಪ್ಪ ಕೊಪ್ಪಳ, ಗುರುರಾಜ್ ಹಲಿಗೇರಿ ಸೇರಿದಂತೆ ಗಣ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *