
ಕೊಪ್ಪಳ : ತಾಲೂಕಿನ ಯತ್ನಟ್ಟಿ ಗ್ರಾಮದಲ್ಲಿ ಶ್ರೀ ಗುರು ಬಸವರಾಜೇಂದ್ರ ಶಿವಯೋಗಿಗಳ ಜಾತ್ರ ಮಹೋತ್ಸವದ ಅಂಗವಾಗಿ ಬಿ.ವಿ. ಈಶ ವಿರಚಿತ “ಆಶಾ -ಲತಾ ” ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.
ನಾಟಕದ ದಿವ್ಯ ಸಾನಿಧ್ಯವನ್ನು ಶ್ರೀ. ಮ. ನಿ. ಪ್ರ. ಜ. ಡಾ. ಶ್ರೀಹಿರಿಶಾಂತವೀರ ಮಹಾಸ್ವಾಮಿಗಳು ಹೂವಿನ ಹಡಗಲಿ ವಹಿಸುವರು,ಮಾಜಿ ಸಂಸದ ಸಂಗಣ್ಣ ಕರಡಿ ಜ್ಯೋತಿ ಬೆಳಗಿಸುವರು. ಶಾಸಕ ಕೆ ರಾಘವೇಂದ್ರ ಹಿಟ್ನಾಳ ಉದ್ಘಾಟಿಸುವವರು, ವಿಶೇಷ ಆಹ್ವಾನಿತರಾಗಿ ಸಂಸದ ಕೆ ರಾಜಶೇಖರ್ ಹಿಟ್ನಾಳ್ ಪಾಲ್ಗೊಳ್ಳುವರು, ಓಜನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹುಚ್ಚಪ್ಪ ಬೋವಿ ಅಧ್ಯಕ್ಷತೆ ವಹಿಸುವರು.
ಈ ನಾಟಕದಲ್ಲಿ ಕೊಪ್ಪಳ ಜಿಲ್ಲಾ ಸಹಕಾರಿ ಯೂನಿಯನ್ ಉಪಾಧ್ಯಕ್ಷ ಹಾಗೂ ನಾಟಕ ಕವಿ ಹಾಲಯ್ಯ ಹುಡೇಜಾಲಿ ಅವರು ಕೊಟ್ರಶೆಟ್ಟಿ ಹಾಸ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುವರು.
ಬಿಡುಗಡೆ: 3ನೇ ನಾಟಕದ ಕೃತಿ “ರೈತನ ರಣಕಹಳೆ ” ಅರ್ಥಾತ್ ರಣರಂಗದಲ್ಲಿ ರೊಚ್ಚಿಗೆದ್ದ ರವಿಚಂದ್ರ ನಾಟಕವನ್ನು ಶ್ರೀ ಗುರು ಬಸವರಾಜೇಂದ್ರ ನಾಟ್ಯ ಸಂಘ ಯತ್ನಟ್ಟಿ ಇವರ ಸಹಯೋಗದಲ್ಲಿ ಶ್ರೀ. ಮ. ನಿ. ಪ್ರ. ಜ. ಡಾ. ಶ್ರೀಹಿರಿಶಾಂತವೀರ ಮಹಾಸ್ವಾಮಿಗಳು ಹೂವಿನ ಹಡಗಲಿ ಹಾಗೂ ಪೂಜ್ಯ ಷ. ಬ್ರ. 108 ಶ್ರೀ ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು ಇವರ ಅಮೃತ ಹಸ್ತದಿಂದ ಬಿಡುಗಡೆಗೊಳಿಸುವರು.
ಈ ಸಮಾರಂಭಕ್ಕೆ ಕಲಾಭಿಮಾನಿಗಳು, ಕಲಾವಿದರು, ಕಲಾಪೋಷಕರು, ಹಿತೈಷಿಗಳು ಹಾಗೂ ಎಲ್ಲಾ ನನ್ನ ಸುತ್ತ ಮುತ್ತಲಿನ ಗ್ರಾಮದ ಮತ್ತು ಯತ್ನಟ್ಟಿ ಗ್ರಾಮದ ಗುರುಹಿರಿಯರು ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ತಿಳಿಸಿದ್ದಾರೆ.