June 5, 2025
IMG_20250330_173009

ಯುಗಾದಿ-ರಂಜಾನ್ ಹಬ್ಬದ ಕಿಟ್ ವಿತರಿಸಿದ ಕೆ.ಎಂ ಸೈಯ್ಯದ್
ಕೊಪ್ಪಳ: ಯುಗಾದಿ ಹಾಗೂ ರಂಜಾನ್ ಹಬ್ಬದ ನಿಮಿತ್ತ ಸೈಯದ್ ಫೌಂಡೇಶನ್ ವತಿಯಿಂದ ಗ್ರಾಮೀಣ ಜನತೆಗೆ ಫೌಂಡೇಶನ್ ಅಧ್ಯಕ್ಷ ಕೆ.ಎಂ. ಸೈಯದ್ ಕಿಟ್ ವಿತರಿಸಿದರು.
ತಾಲೂಕಿನ ಹೊಸಳ್ಳಿ, ಮುನಿರಾಬಾದ್, ಹುಲಿಗಿ, ಹಳೆ ಬಂಡಿ‌ ಹರ್ಲಾಪೂರ್, ಹೊಸ ಬಂಡಿ ಹರ್ಲಾಪುರ್, ಶಿವಪುರ್ ಜನತೆ ಕಿಟ್ ವಿತರಿಸಿ ಮಾತನಾಡಿ
ಯುಗಾದಿ ಹಬ್ಬವು ಗ್ರಾಮೀಣ ಜನತೆಯಲ್ಲಿ ಹೊಸ ವರ್ಷವಾಗಿದ್ದು ಬೇವು ಬೆಲ್ಲ ಸವಿದು ಸಿಹಿ ಕಹಿಯನ್ನು ಸಮಾನವಾಗಿ ಸ್ವೀಕರಿಸುವ ಹಬ್ಬವಾಗಿದ್ದು ಹಾಗೂ ರಂಜಾನ್ ಉಪವಾಸ ಹಸಿವಿನ
ಅರಿವನ್ನು ಮೂಡಿಸಿ ಬಡಜನತೆ ಹಸಿವಿನಿಂದ ಪರಿತಪಿಸುವ ಅನುಭವ ರಂಜಾನ್ ಉಪವಾಸ ಮಾಡುವವರಿಗೆ ಅರಿವು ಮೂಡಿಸುತ್ತದೆ, ರಂಜಾನ್ ಉಪವಾಸವು ಪಂಚೇಂದ್ರಿಗಳನ್ನು ನಿಗ್ರಹಿಸಿ ಸೃಷ್ಟಿಕರ್ತನಿಗೆ ಶರಣಾಗುವುದೇ ರಂಜಾನ್ ಮಾಸದ ಧೇಯ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಯಮನೂರಪ್ಪ ನಾಯಕ್, ರಾಮು ಬೋವಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *