July 18, 2025
IMG_20250706_161107

ಕೊಪ್ಪಳ : ಕ್ರಿಕೆಟ್ ನಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳುವುದರಿಂದ ದೇಹ ಸದೃಢಗೊಳ್ಳುತ್ತದೆ, ಕ್ರೀಡೆಯಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಎಂದು ಬಹದ್ದೂರ್ ಬಂಡಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಯೋಗಾನಂದ ಪ್ರಭುಗೌಡ ಮಾಲಿಪಾಟೀಲ್ ಹೇಳಿದರು.
     

    ಅವರು ತಾಲೂಕಿನ ಚುಕ್ಕನಕಲ್ ಗ್ರಾಮದಲ್ಲಿ ಮೊಹರಂ ಹಬ್ಬದ ಪ್ರಯುಕ್ತ ಕ್ರಿಕೆಟ್ ಟೂರ್ನಮೆಂಟ್ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಿ ಮಾತನಾಡಿ ಕ್ರಿಕೆಟ್ ಎಲ್ಲರಿಗೂ ಅಚ್ಚುಮೆಚ್ಚಿನ ಕ್ರೀಡೆಯಾಗಿದೆ, ಗ್ರಾಮೀಣಮಟ್ಟದಲ್ಲಿ ಟೂರ್ನಮೆಂಟ್ ಆಯೋಜಿಸಿ ಕ್ರೀಡೆಯಲ್ಲಿ ಪಾಲ್ಗೊಳ್ಳುತ್ತಿರುವುದು ಸಂತಸ ತಂದಿದೆ ಎಂದರು.
    ಟೂರ್ನಿಯಲ್ಲಿ ಪ್ರಥಮ ಬಹುಮಾನವನ್ನು ಬಿಗ್ ಬಾಸ್ ತಂಡ, ದ್ವಿತೀಯ ಬಹುಮಾನವನ್ನು ಮೂನ್ ಸ್ಟಾರ್ ತಂಡ ಗೆದ್ದುಕೊಂಡಿತು.

    ಈ ಟೂರ್ನಮೆಂಟ್ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಫಕ್ರುದ್ದೀನ್ ನದಾಫ್, ಸಿದ್ದನಗೌಡ ಪೊಲೀಸ್ ಪಾಟೀಲ್, ರಾಮನಗೌಡ ಮುಂಡರಗಿ, ಹನುಮಂತ, ಫಕ್ಕಿರೆಡ್ಡಿ ಪ್ಯಾಟಿ, ರಾಮು ತಿಮ್ಮಲಾಪುರ, ಮರಿಯಪ್ಪ , ಟೂರ್ನಿಯಾ ಆಯೋಜಕರಾಗಿರುವ ಸಿಪಿಎಲ್ ತಂಡದ ಎಲ್ಲಾ ಆಟಗಾರರು ಗ್ರಾಮದ ಗುರು -ಹಿರಿಯರು ಮತ್ತು ಎಲ್ಲಾ ಯುವಕರು ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *