June 6, 2025
IMG_20250606_164541

ಕೊಪ್ಪಳ : ತ್ಯಾಗ ಬಲಿದಾನದ ಪ್ರತೀಕ, ಪುತ್ರ ಪ್ರೇಮ, ಪಿತ್ರ ವಾತ್ಸಲ್ಯ, ದೈವ ಭಕ್ತಿಗಳ ಸಮ್ಮಿಲನ ಪವಿತ್ರ ಈದುಲ್ ಆಝಾ ಬಕ್ರೀದ್ ಹಬ್ಬ ಸಡಗರ ಸಂಭ್ರಮದಿಂದ ಆಚರಣೆಗೆ ಹಾಗೂ ಸಾಮೂಹಿಕ ಪ್ರಾರ್ಥನೆಗೆ ಕೊಪ್ಪಳ ನಗರದ ಎರಡು ಪ್ರಮುಖ ಈದ್ಗಾ ಮೈದಾನ ಸಜ್ಜುಗೊಂಡಿದೆ ಶುಕ್ರವಾರದಂದು ಕೊಪ್ಪಳ ನಗರಸಭೆಯ ಅಧ್ಯಕ್ಷರಾದ ಅಮ್ಜದ್ ಪಟೇಲ್ ರವರು ಈದ್ಗಾ ಮೈದಾನಕ್ಕೆ ಭೇಟಿ ಮಾಡಿ ಅಲ್ಲಿ ನಡೆಯುತ್ತಿರುವ ಸ್ವಚ್ಛತಾ ಕಾರ್ಯವನ್ನು ವೀಕ್ಷಣೆ ಮಾಡಿದರು.

  ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ನಾಳೆ ಶನಿವಾರ ಸುಮಾರು ಬೆಳಿಗ್ಗೆ 9.30 ಗಂಟೆಗೆ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಗಳಲ್ಲಿ ಭಾಗ ವಹಿಸಿ ನಂತರ ಪರಸ್ಪರ ಹಬ್ಬದ ಶುಭಾಶಯಗಳು ವಿನಿಮಯ ಮಾಡಿ ಕೊಳ್ಳಲಿದ್ದಾರೆ, ಈದ್ಗಾ ಮೈದಾನಕ್ಕೆ ಬರುವ ಮುಸ್ಲಿಂ ಸಮಾಜ ಬಾಂಧವರಿಗೆ ಯಾವುದೇ ರೀತಿಯ ಅನಾನುಕೂಲತೆಯಾಗದಂತೆ ಜಿಲ್ಲಾ ಆಡಳಿತದ ಮಾರ್ಗದರ್ಶನದಲ್ಲಿ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಕೊಪ್ಪಳ ನಗರಸಭೆಯ ವತಿಯಿಂದ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ ಪ್ರತಿ ವರ್ಷದಂತೆ ಈ ವರ್ಷವೂ ಸಹ ವಾಹನಗಳ ನಿಲುಗಡೆ ಪಾರ್ಕಿಂಗ್ ಗಾಗಿ ನಗರಸಭೆ ಎದುರುಗಡೆ ಇರುವ ಶಾದಿ ಮಹಲ್ ಅವರ್ಣ ಶಾಸಕರ ಸರಕಾರ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಅವರಣ ಇಂದಿರಾ ಕ್ಯಾಂಟೀನ್ ಹಿಂಭಾಗ ಮತ್ತು ಜಿಲ್ಲಾ ಕೈಗಾರಿಕಾ ಕೇಂದ್ರಗಳ ಕಚೇರಿ ಆವರಣ ಇತ್ಯಾದಿ ಕಡೆಗಳಲ್ಲಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಸಹ ಮಾಡಲು ವ್ಯವಸ್ಥೆ ಮಾಡಲಾಗಿದೆ ಒಟ್ಟಾರೆ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸುವ ಸಾರ್ವಜನಿಕರಿಗೆ ಯಾವುದೇ ರೀತಿಯ ಅನಾನುಕೂಲತೆಯಾಗದಂತೆ ವ್ಯವಸ್ತೆ ಮಾಡಲಾಗಿದೆ ಎಂದು ಕೊಪ್ಪಳ ನಗರಸಭೆಯ ಅಧ್ಯಕ್ಷರಾದ ಅಮ್ಜದ್ ಪಟೇಲ್ ವಿವರಿಸಿದ್ದಾರೆ
  ಈ ಸಂದರ್ಭದಲ್ಲಿ ಅವರೊಂದಿಗೆ ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಸಯ್ಯಸ್ವಾಮಿ ಹಿರೇಮಠ್ ನಗರಸಭೆ ಸದಸ್ಯರಾದ ಅಜೀಮುದ್ದೀನ್ ಅತ್ತಾರ್, ಕಾಂಗ್ರೆಸ್ ಪಕ್ಷದ ಮುಖಂಡ ರಮೇಶ್ ಗಿಣಗೇರಿ, ನಗರಸಭೆ ಕಿರಿಯ ಅಭಿಯಂತರರಾದ ಸೋಮಲಿಂಗಪ್ಪ, ಲಾಲ್ ಶಾ ಮನಿಯಾರ್ ಮತ್ತಿತರರು ನಗರಸಭೆಯ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *