
ಕೊಪ್ಪಳ : ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಇತಿಹಾಸ ನಿರ್ಮಿಸಿದ ಶ್ರೀನಿವಾಸ್ ಜನಾದ್ರಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊಪ್ಪಳ ಜಿಲ್ಲಾ ಉಗ್ರಾಣದ ಹಿರಿಯ ಫಾರ್ಮಸಿ ಅಧಿಕಾರಿಯಾಗಿ ಸೇವೆಯಿಂದ ಅಧಿಕೃತವಾಗಿ ನಿವೃತ್ತಗೊಂಡಿದ್ದರಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆಯ ಅಧಿಕಾರಿ ಟಿ.ಲಿಂಗರಾಜ್ ಅವರು ದಂಪತಿಗಳನ್ನು ಸನ್ಮಾನಿಸಿ ಗೌರವಿಸಿದರು.
. ಅವರು ಮೇ 31 ರಂದು ನಿವೃತ್ತಗೊಂಡ ನಿಮಿತ್ತ ಕಚೇರಿಯಲ್ಲಿ ಸನ್ಮಾನಗೊಳಿಸಿ ಮಾತನಾಡಿ ಗುಂಡಪ್ಪ ಜನಾದ್ರಿ ಹಾಗೂ ಲಕ್ಷ್ಮಿದೇವಿ ದಂಪತಿ ಪುತ್ರರಾದ ಶ್ರೀನಿವಾಸ್ ಅವರು, ಶೀನಣ್ಣ ಎಂದೇ ಕೊಪ್ಪಳಕ್ಕೆ ಚಿರಪರಿಚಿತ ಹೆಸರಾಗಿದ್ದು, ಅವರು ತೋರಿದ ಸಮಾಜಮುಖಿ ದಾರಿಗೆ ಇನ್ನೂ ಹಲವರು ಪ್ರೇರಿತರಾಗಲಿ ಎಂಬದು ಅವರು ಎಂದೂ ಅಧಿಕಾರ, ಹಣ ಈ ಎರಡರಲ್ಲೇ ಯಶಸ್ಸು ಸೀಮಿತವಲ್ಲ ಎಂಬ ನಿಜವಾದ ಅರ್ಥವನ್ನು ತಮ್ಮ ಸಮಾಜಮುಖಿ ಬದುಕಿನಿಂದ ಶ್ರೀನಿವಾಸ್ ಜನಾದ್ರಿ ಅವರು ಸ್ಪಷ್ಟಪಡಿಸಿದ್ದಾರೆ,02-01-1990 ರಲ್ಲಿ ಪಾರ್ಮಸಿ ಹುದ್ದೆಗೆ ನೇಮಗೊಂಡ ಇವರು ಒಂದು ಕಪ್ಪು ಚುಕ್ಕೆ ಇಲ್ಲದೆ ಇಲಾಖೆಯ ವಿವಿಧ ಸಂಘ ಸಂಸ್ಥೆಗಳಲ್ಲಿ ಒಬ್ಬರಾಗಿ ಹಾಗೂ ಆರೋಗ್ಯ ಇಲಾಖೆಯ ಗೃಹ ನಿರ್ಮಾಣ ಸಂಘದ ಅಧ್ಯಕ್ಷರಾಗಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಕ್ರಿಯ ಕಾರ್ಯಕರ್ತರಾಗಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಶ್ರದ್ದೆಯಿಂದ’ ಭಾಗವಹಿಸುತ್ತಾ, ಶ್ರೀನಿವಾಸ್ ಜನಾದ್ರಿ ಹಲವಾರು ಸೇವೆಗಳ ಮೂಲಕ ಸಮಾಜಕ್ಕೆ ದಾರಿದೀಪವಾಗಿದ್ದಾರೆ, ವಿಶೇಷ ವಿದ್ಯಾಭ್ಯಾ ಸಕ್ಕಾಗಿ ತಮ್ಮದೇ ಆದ ವೆಚ್ಚದಲ್ಲಿ ನೆರವಾಗುತ್ತಿರುವುದು ಅವರಿಗೆ ಮಾನವೀಯ ಮುಖವನ್ನೂ ನೋಡಬಹುದಾಗಿದೆ. , ಬಡ ವಿದ್ಯಾರ್ಥಿಗಳ ಅಪಾರ ಸೇವೆಯೊಂದರ ಭಾಗವಾಗಿ ಅವರು ಅನೇಕ ಶಿಬಿರಗಳನ್ನು ತಾವು ಖರ್ಚು ಹೊತ್ತು ನಡೆಸಿದ್ದಾರೆ. ಸಾಮಾನ್ಯ ಜನರಲ್ಲಿ ಹೆಚ್ಚು ಬೆರೆತು ನಗುನಗುತ ತಮ್ಮ ಮಿತವ್ಯಯಿ ನಡತೆ ಹಾಗೂ ಸದು ಪದೇಶಗಳಿಂದ ಜನರ ಬಾಳಿನಲ್ಲಿ ದಾರಿ ದೀಪ ಎನಿಸಿಕೊಂಡಿದ್ದಾರೆ ಅವರ ನಿವೃತ್ತಿ ಜೀವನ ಹಾಗೂ ಆರೋಗ್ಯ ಸುಖಕರವಾಗಿರಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಸರಕಾರಿ ನೌಕರ ಸಂಘದ ಅಧ್ಯಕ್ಷ ನಾಗರಾಜ್ ಜುಮ್ಮಣ್ಣನವರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆಯ ಅಧಿಕಾರಿ ಡಾ. ರವೀಂದ್ರನಾಥ,ಕೊಪ್ಪಳ ಜಿಲ್ಲಾ ಆರ್ಯವೈಶ್ಯ ಸಮಾಜದ ಉಪಾಧ್ಯಕ್ಷ ನಾರಾಯಣ ಕುರುಗೋಡು, ಸದಸ್ಯರಾದ ಹನುಮೇಶ್ ಇಲ್ಲೂರು, ವೆಂಕಟೇಶ್ ಚಿತ್ರಾಲಿ,ಡಿ. ಜಗನ್ನಾಥ್ ಶೆಟ್ಟಿ, ನಾಗಭೂಷಣ ವೆಮಲಿ, ಫಾರ್ಮಸಿ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.