
ಕೊಪ್ಪಳ: ಉತ್ತರ ಪ್ರದೇಶದ ಪ್ರಯಾಗ್ ರಾಜ್ ಮಹಾನಗರ ದಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಕೊಪ್ಪಳ ತಾಲೂಕಿನ ಓಜನಹಳ್ಳಿ ಗ್ರಾಮದ ಕಾಂಗ್ರೆಸ್ ಪಕ್ಷದ ಯುವ ಮುಖಂಡ ರವಿಚಂದ್ರ ಗೌಡ ವಣಗೇರಿ ಓಜಿನಹಳ್ಳಿ ಭಾಗಿಯಾಗಿ ಪವಿತ್ರ ಗಂಗಾ ಯಮುನಾ ಮತ್ತು ಸರಸ್ವತಿ ತ್ರಿವೇಣಿ ಸಂಗಮ ನದಿ ಯಲ್ಲಿ ಮಹಾ ಕುಂಭಮೇಳ ಪ್ರಯುಕ್ತ ಪುಣ್ಯ ಸ್ನಾನ ಮಾಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಮಹಾ ಕುಂಭಮೇಳದಲ್ಲಿ ಪಾಲ್ಗೊಳ್ಳಲು ನನಗೆ ಅವಕಾಶ ಸಿಕ್ಕಿರುವುದು ನನ್ನ ಪುಣ್ಯ ಸಂತಸ ಉಂಟಾಗಿದೆ. ಇಂತಹ ನದಿಯಲ್ಲಿ ಸ್ನಾನ ಮಾಡಿ ಪುಣ್ಯಗಳಿಸಿಕೊಳ್ಳಲು ಅವಕಾಶ ಸಿಕ್ಕಿರುವುದಕ್ಕೆ ಸಂತಸ ಮತ್ತು ಹರ್ಷ ವ್ಯಕ್ತಪಡಿಸಿದ ಅವರು ಸರ್ವ ರಿಗೂ ಶಾಂತಿ ನೆಮ್ಮದಿ ಸಿಗಲಿ ಎಂದು ಅವರು ದೇವರಲ್ಲಿ ಪ್ರಾರ್ಥಿಸಿದರು.