June 5, 2025
IMG-20250222-WA0067

ಕೊಪ್ಪಳ: ಬಲ್ದೋಟ ಉಕ್ಕು ಕಾರ್ಖಾನೆ ಸ್ಥಾಪನೆಯ ವಿರುದ್ಧ ಫೆಬ್ರುವರಿ 24ರಂದು ನಡೆಯಲಿರುವ ಕೊಪ್ಪಳ ಬಂದ್ ಗೆ ಅಂಬೇಡ್ಕರ್ ಸೇನೆ ಸಂಪೂರ್ಣವಾಗಿ ಬೆಂಬಲ ನೀಡಲಿದೆ‌ ಅಂಬೇಡ್ಕರ್ ಸೇನೆ ಗೌರವ್ಯಾಧ್ಯಕ್ಷ ಯಂಕಪ್ಪ ಹೊಸಳ್ಳಿ ತಿಳಿಸಿದ್ದಾರೆ

    ಅಂದು ನಮ್ಮ ಸಂಘದ ಎಲ್ಲಾ ತಾಲೂಕಾಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಾಗೂ ಗ್ರಾಮಾಂತರದ ನಮ್ಮ ಸಂಘಟನೆಗಳು ಸಂಪೂರ್ಣವಾಗಿ ಬೆಂಬಲಿಸುವರು.

   ಅಂಬೇಡ್ಕರ್ ಸೇನೆಯ ಜಿಲ್ಲಾಧ್ಯಕ್ಷ ಸಿದ್ದು ಮಣ್ಣಿನವರ್ ಅವರು ಮುಂದಿನ ಪೀಳಿಗೆಯ ಭವಿಷ್ಯದ ಸರ್ವನಾಶದ ದ್ಯೋತಕವಾಗಿರುವ ಆ ಕಾರ್ಖಾನೆ ಕೊಪ್ಪಳದಿಂದ ತೊಲಗಬೇಕೆಂಬುದು ಬೇಡಿಕೆಯಾಗಿದೆ ಈ ಬಂದ್ ಗೆ ಸಹಸ್ರಾರು ಸಂಖ್ಯೆಯಲ್ಲಿ ಜನತೆ ಪಾಲ್ಗೊಂಡು ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದ್ದಾರೆ.
ಅಂಬೇಡ್ಕರ್ ಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಗಪ್ಪ ಗದ್ದಿ, ಕಾನೂನು ಸಲಹೆಗಾರದ ವೀರಭದ್ರಪ್ಪ ನಾಯಕ್, ಕರ್ನಾಟಕ ಜನ ರಕ್ಷಣಾ ಸಂಘದ ರಾಜ್ಯಾಧ್ಯಕ್ಷ ಎಂ.ಪಿ ಗವಿ ಹೂಗಾರ್, ರಾಜ್ಯ ಸಂಚಾಲಕ ದ್ಯಾಮಣ್ಣ ಭಜಂತ್ರಿ, ಶಿವಪ್ಪ ಚಿತ್ತಾಪುರ, ಮಾರ್ಕಂಡಪ್ಪ ಹೊಸಳ್ಳಿ ಮತ್ತಿತರರು ಕೊಪ್ಪಳ ಬಂದ್ ಗೆ ಬೆಂಬಲಿಸುವುದಾಗಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *