ಕೊಪ್ಪಳ: ಭಾಗ್ಯನಗರ ಪಟ್ಟಣ ಪಂಚಾಯಿತಿಯಲ್ಲಿ ಮಡಿವಾಳ ಮಾಚಿದೇವ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜಯಂತಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಭಾಗ್ಯನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ರಮೇಶ್ ಹ್ಯಾಟಿ, ಉಪಾಧ್ಯಕ್ಷ ಹೊನ್ನೂರ್ ಸಾಬ್ ಬೈರಾಪುರ, ಪಟ್ಟಣ ಪಂಚಾಯಿತಿ ಹಿರಿಯ ಸದಸ್ಯರಾದ ತುಕಾರಾಮಪ್ಪ ಗಡಾದ,ಸ್ಥಾಯಿ ಸಮಿತಿ ಅಧ್ಯಕ್ಷ ಶಿವರಾಮ ಮ್ಯಾಗಳಮನಿ, ಸದಸ್ಯರಾದ ವಾಸುದೇವ ಮೇಘರಾಜ್, ಸರಸ್ವತಿ ಇಟ್ಟಂಗಿ, ಮಂಜುಳಾ ಮ್ಯಾಗಳಮನಿ, ಮೋಹನ್ ಅರಕಲ್, ಪರಶುರಾಮ್ ನಾಯಕ್, ಗೌರಮ್ಮ ಉಂಕಿ, ಗವಿಸಿದ್ದಯ್ಯ ಕೆಂಭಾವಿಮಠ, ಜಯಮಾಲಾ ಶೆಡಮಿ, ಗವಿಸಿದ್ದಪ್ಪ ಮಗಿನಳ್ಳಿ, ಪಾಲಾಕ್ಷಮ್ಮ ಕವಲೂರ್, ಕಸ್ತೂರಿ ಹಂಚಿನಮನಿ, ಮಂಜುಳಾ ಶ್ಯಾವಿ, ರೋಷನ ಅಲಿ ಮಂಗಳೂರು, ಜಗದೀಶ್ ಮಾಲಗಿತ್ತಿ, ಲಲಿತಾ ಡಂಬಳ, ನಾಮನಿರ್ದೇಶನ ಸದಸ್ಯರಾದ ಇಬ್ರಾಹಿಂ ಸಾಬ್ ಬಿಸರಳ್ಳಿ, ಹನುಮಂತಪ್ಪ ಬಂಡಿ, ಸವಿತಾ ಗೋರಂಟ್ಲಿ ಮುಖ್ಯಾಧಿಕಾರಿಗಳಾದ ಸುರೇಶ್ ಬಬಲಾದ, ಸಮಾಜದ ಮುಖಂಡರು,ಸಿಬ್ಬಂದಿ ವರ್ಗದವರು, ಪಟ್ಟಣದ ಗುರು ಹಿರಿಯರು ಉಪಸ್ಥಿತರಿದ್ದರು.
