
ನಗರಕ್ಕೆ ನಾಳೆ ‘ಎಕ್ಕ’ ಚಿತ್ರದ ನಾಯಕ ಯುವರಾಜಕುಮಾರ
ಕೊಪ್ಪಳ : ಕನ್ನಡ ಚಿತ್ರ ‘ಎಕ್ಕ’ ಸಿನಿಮಾದ ನಾಯಕರಾದ ರಾಘವೇಂದ್ರ ರಾಜ್ಕುಮಾರ ಅವರ ಸುಪುತ್ರ ಯುವರಾಜಕುಮಾರರವರು ಕೊಪ್ಪಳ ನಗರದ ಶ್ರೀ ಲಕ್ಷ್ಮಿ ಚಿತ್ರಮಂದಿರಕ್ಕೆ ನಾಳೆ ದಿ.27 ರಂದು ಮಧ್ಯಾಹ್ನ 2 ಗಂಟೆಗೆ ಆಗಮಿಸಿ ಪ್ರೇಕ್ಷಕರನ್ನು ಭೇಟಿ ಮಾಡುವರು.
ಎಕ್ಕ ಚಿತ್ರವು ರಾಜ್ಯಾದಾದ್ಯಂತ ಯಶಸ್ವಿ ಪ್ರದರ್ಶನಗೊಳ್ಳುತ್ತಿದ್ದು
ಯಶಸ್ವಿಗೆ ಕಾರಣರಾದ ಚಿತ್ರ ಅಭಿಮಾನಿಗಳನ್ನು ಭೇಟಿ ಮಾಡಲು ಕೊಪ್ಪಳ ನಗರಕ್ಕೆ ಆಗಮಿಸುತ್ತಿದ್ದು ನಾಯಕನಟ ಯುವರಾಜ್ ಕುಮಾರ್ ಅಭಿಮಾನಿಗಳು, ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸುವಂತೆ ಚಲನಚಿತ್ರಮಂದಿರದ ಮಾಲೀಕರಾದ ವೀರೇಶ್ ಮಹಾಂತನಯ್ಯನಮಠ, ವಿಶ್ವನಾಥ್ ಮಹಾಂತಯ್ಯನಮಠ, ವ್ಯವಸ್ಥಾಪಕ ಶಿವಾನಂದಯ್ಯ ಉತ್ತಂಗಿಮಠ ತಿಳಿಸಿದ್ದಾರೆ.