June 5, 2025
IMG_20241212_194545

ಕೊಪ್ಪಳ : ಹಿರಿಯ ಸಾಹಿತಿ ಹಾಗೂ ಚಲನಚಿತ್ರ ಸಾಹಿತಿ ಡಾ. ಮಹಾಂತೇಶ ಮಲ್ಲನಗೌಡರ ಪುತ್ರ ಅವಿನಾಶ್ ಮಲ್ಲನಗೌಡರ 38 ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.
      ನಗರದ ಜೆಕೆಎಸ್ ರೆಸಾರ್ಟಿನಲ್ಲಿ ಅವಿನಾಶ್ ಮಲ್ಲನಗೌಡರ ಜನ್ಮದಿನಾಚರಣೆ ನಿಮಿತ್ತ ಹಿರಿಯ ಉಪನ್ಯಾಸಕ ಶರಣಬಸಪ್ಪ ಬಿಳಿಎಲಿ ಸಂಕ್ಷಿಪ್ತ ಬಾಲ್ಯದ ಬಗ್ಗೆ ತಿಳಿಸಿದರು.
   

     ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಪ್ರಾಚಾರ್ಯ ವಿ.ಬಿ.ರೆಡ್ಡೇರ ವಹಿಸಿದ್ದರು.
ಅವಿನಾಶ್ ಮಲ್ಲನಗೌಡರ ಜನ್ಮದಿನ ನಿಮಿತ್ತ ಪಿಎಚ್ ಡಿ ಪಡೆದ ಮಹಾಂತೇಶ್ ನೆಲಗಣಿ,ಹಿರಿಯ ಪತ್ರಕರ್ತ ಬಸವರಾಜ್ ಗಡಾದ್,ಹೈಬ್ರಿಡ್ ನ್ಯೂಸ್ ಸಂಪಾದಕರಾದ ಭೀಮು ಹೊರಪೇಟೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಅವಿನಾಶ್ ಮಲ್ಲನಗೌಡರಿಗೆ ಅನೇಕರು ಜನ್ಮದಿನಾಚರಣೆಯ ಶುಭವನ್ನು ಕೋರಿದರು.
     ಈ ಸಂದರ್ಭದಲ್ಲಿ ಡಾ. ಶಿವಬಸಪ್ಪ ಮಸ್ಕಿ , ಉಪನ್ಯಾಸಕರಾದ ನಾಗರಾಜ್ ದಂಡೋತಿ, ನಿರ್ಮಲ ರೆಡ್ಡೇರ್, ಪ್ರಿಯದರ್ಶಿನಿ ಮುಂಡರಗಿಮಠ .ಬಿಎಸ್ಪಿ ಪಕ್ಷದ ಮುಖಂಡ ಮಹಬೂಬ್ ಖಾನ್, ಡಾ.ಮಹಾಂತೇಶ್ ಮಲ್ಲನಗೌಡರ ಕುಟುಂಬ ವರ್ಗದವರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *