June 5, 2025
IMG_20250209_220630

ಕೊಪ್ಪಳ : ಹಾಸ್ಯ ಚಕ್ರವರ್ತಿ ಬಿ.ಪ್ರಾಣೇಶ್ ಅವರು ದಿ.15 ರಂದು ಸಂಜೆ 4 ಗಂಟೆಗೆ ಕೊಪ್ಪಳ ನಗರದ ಗದಗ್ ರಸ್ತೆಯ ಮಂಗಳಾಪುರ್ ಕ್ರಾಸ್ ಬಳಿಯ “ನ್ಯೂ ಎಕ್ಸಲೆಂಟ್ ” ಪಬ್ಲಿಕ್ ಶಾಲೆಯ ಎಕ್ಸಲೆಂಟ್ ಪೇಸ್ಟ್ 10 ನೇ ವಾರ್ಷಿಕೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸುವರು.
ದಿವ್ಯ ಸಾನಿಧ್ಯವನ್ನು ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು, ನೇತೃತ್ವವನ್ನು ಷ.ಬ್ರ. ಶ್ರೀ ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ಹೆಬ್ಬಾಳ ವಹಿಸುವರು.
     ಉದ್ಘಾಟನೆಯನ್ನು ಭಾರತ ಸ್ಕೌಟ್ ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಹಾಗೂ ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ನೆರವೇರಿಸುವರು.
    ಅಧ್ಯಕ್ಷತೆಯನ್ನು ಭಾರತ ಸ್ಕೌಟ್ ಗೈಡ್ಸ್ ರಾಜ್ಯ ಉಪಾಧ್ಯಕ್ಷ ಹಾಗೂ ಜಿಲ್ಲಾ ಮುಖ್ಯ ಆಯುಕ್ತ ಹೆಚ್. ಎಮ್. ಸಿದ್ದರಾಮಸ್ವಾಮಿ ವಹಿಸುವರು.
    ಮುಖ್ಯ ಅತಿಥಿಗಳಾಗಿ ಚಂದ್ರಶೇಖರಯ್ಯ ಹಿರೇಮಠ ಅಧ್ಯಕ್ಷರು ಪಿಕಾರ್ಡ್ ಬ್ಯಾಂಕ್. ಯಲಬುರ್ಗಾ, ಶ್ರೀಮತಿ ಮಲ್ಲೇಶ್ವರಿ ಜೂಜಾರೆ ಭಾರತ ಸ್ಕೌಟ್ ಗೈಡ್ಸ್ ರಾಜ್ಯ ಸಂಘಟನಾ ಆಯುಕ್ತರು, ಉಸ್ತುವಾರಿಗಳು, ಕಲ್ಯಾಣ ಕರ್ನಾಟಕ‌ ಅವರು ಪಾಲ್ಗೊಳ್ಳುವರು.
ಅತಿಥಿಗಳಾಗಿ ಹನಮಗೌಡ ರಡ್ಡೆರ,ಜಯರಾಮ ಪತ್ತಾರ,ದುರ್ಗಾರಾಮ ಸುತಾರ,ಚಂದ್ರಪ್ಪ ಹಡಪದ,ಡಾ.ಮಲ್ಲಿಕಾರ್ಜುನ ಮೇಟಿ,ಯಲ್ಲಪ್ಪ ಕಂಬ್ಬಿ,ನಿರ್ಮಲಾ ಸಾಲಿಮಠ, ಮಹಮ್ಮದ್ ಖಾಜಾಹುಸೇನ, ರಾಮಚಂದ್ರಪ್ಪ ವರ್ಣೇಕರ,ವೀರಣ್ಣ ಚಕ್ರಸಾಲಿ, ಗಿರಿಜಾ ಮೈನಳ್ಳಿ ಭಾಗವಹಿಸುವವರು ಎಂದು ಸಂಸ್ಥೆಯ ಟ್ರಸ್ಟಿ ಹಾಗೂ ಪ್ರಾಚಾರ್ಯ ಮಲ್ಲಿಕಾರ್ಜುನ್ ಸಾಲಿಮಠ ತಿಳಿಸಿದ್ದಾರೆ.

Leave a Reply

Your email address will not be published. Required fields are marked *